23
Wednesday
April, 2025

A News 365Times Venture

ಕೇಂದ್ರದಿಂದ ಬೆಲೆ ಏರಿಕೆ: ರಾಜ್ಯ, ಜಿಲ್ಲಾ ಮಟ್ಟದಲ್ಲಿ ಹೋರಾಟ- ಡಿಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು,ಏಪ್ರಿಲ್,12,2025 (www.justkannada.in):  ಬೆಲೆ ಏರಿಕೆ ಮಾಡಿರುವುದನ್ನ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಡಿಕೆ ಶಿವಕುಮಾರ್,  ಕೇಂದ್ರ ಸರ್ಕಾರ  ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ.  ಆದರೆ ರಾಜ್ಯ ಬಿಜೆಪಿಯವರು ನಮ್ಮ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ. ಮೊದಲು ಬಿಜೆಪಿ ಬೋರ್ಡ್ ಬದಲಿಸಲಿ. ಆರ್. ಅಶೋಕ್, ವಿಜಯೇಂದ್ರಗೆ ಮನವಿ ಮಾಡುತ್ತೇನೆ.  ಅಂದು ಬೆಲೆ ಏಷ್ಟು ಇತ್ತು.  ಮೋದಿ ಸರ್ಕಾರ  ಬಂದ ಮೇಲೆ ಎಷ್ಟು ಬೆಲೆ ಏರಿಕೆಯಾಗಿದೆ ಎಂದು ತಿಳಿದುಕೊಳ್ಳಲಿ . ಜನರಿಗೆ ಅನುಕೂಲ ಆಗಲಿ ಅಂತಾ ನಾವು 5 ಗ್ಯಾರಂಟಿ ತಂದಿದ್ದೇವೆ ಪ್ರತಿ ಜಿಲ್ಲೆಗಳಲ್ಲೂ ಕೇಂದ್ರದ ವಿರುದ್ದ ಹೋರಾಟ ಮಾಡಲು ತೀರ್ಮಾನಿಸುತ್ತೇವೆ  ಮೊದಲು ರಾಜ್ಯಮಟ್ಟದಲ್ಲಿ ಕೇಂದ್ರದ ವಿರುದ್ದ ಹೋರಾಟ ನಂತರ ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತೇವೆ ಎಂದರು.

ಬೆಂಗಳೂರು ಕರಗ ಮಹೋತ್ಸವಕ್ಕೆ ಹಣ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರು ಕರಗ ಮಹೋತ್ಸವಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಬಜೆಟ್ ನಲ್ಲಿ ಕೂಡ ಅನುದಾನ ಮೀಸಲಿಟ್ಟಿದ್ದೇವೆ. ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅವರಲ್ಲಿಯೇ ಎರಡು, ಮೂರು ಗುಂಪುಗಳಿವೆ. ಎಲ್ಲರೂ ಒಗ್ಗಟ್ಟಿನಿಂದ ಬರಬಹುದಿತ್ತು. ಯಾರು ಅರ್ಜಿ ಕೊಟ್ಟಿದ್ದಾರೋ ಅವರಿಗೆ ಹಣ ಕೊಟ್ಟಿದ್ದೇವೆ. ಹಣ ಬಿಡುಗಡೆಯಾಗಿಲ್ಲ ಎಂಬುದು ಸುಳ್ಳು  ಎಂದರು.

Key words: Fight, against, center, state, district levels, DCM, DK Shivakumar

The post ಕೇಂದ್ರದಿಂದ ಬೆಲೆ ಏರಿಕೆ: ರಾಜ್ಯ, ಜಿಲ್ಲಾ ಮಟ್ಟದಲ್ಲಿ ಹೋರಾಟ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ  ನಿಜಕ್ಕೂ ಕೆಟ್ಟ ಬೆಳವಣಿಗೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಏಪ್ರಿಲ್,23,2025 (www.justkannada.in):  ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ  ನಿಜಕ್ಕೂ ಕೆಟ್ಟ...

പഹല്‍ഗാം ഭീകരാക്രമണം; മലയാളിയായ എന്‍. രാമചന്ദ്രന്റെ മൃതദേഹം നാട്ടിലെത്തിച്ചു

കൊച്ചി: ജമ്മു കശ്മീരിലെ പഹല്‍ഗാമില്‍ വിനോദസഞ്ചാരികള്‍ക്ക് നേരെയുണ്ടായ ആക്രമണത്തില്‍ കൊല്ലപ്പെട്ട മലയാളിയായ...

"அமைச்சர் பதவியா, ஜாமீனா?" – காட்டமான உச்ச நீதிமன்றம்; இக்கட்டான நிலையில் செந்தில் பாலாஜி

முதலமைச்சர் ஸ்டாலின் தலைமையிலான தமிழக அமைச்சரவையில் மின்சாரம் மற்றும் மதுவிலக்கு ஆயத்தீர்வை...

Jeethu Joseph: జీతూ జోసెఫ్.. ఆ స్పీడ్ ఏంటయ్యా?

సాధారణంగా మాలీవుడ్ హీరోలు తెలిసినంతగా.. ఫిల్మ్ మేకర్స్ గురించి పెద్దగా అవగాహన...