3
Thursday
April, 2025

A News 365Times Venture

ನಾಳೆ ಯುಗಾದಿ ಹಬ್ಬದ ಸಂಭ್ರಮ: ಗಗನಕ್ಕೇರಿದ ಹೂ, ಹಣ್ಣುಗಳ ಬೆಲೆ

Date:

ಬೆಂಗಳೂರು, ಮಾರ್ಚ್​ 29,2025 (www.justkannada.in):  ನಾಳೆ ಯುಗಾದಿ ಹಬ್ಬದ ಸಂಭ್ರಮವಾಗಿದ್ದು, ರಾಜ್ಯಾದ್ಯಂತ ಖರೀದಿ ಭರಾಟೆ ಜೋರಾಗಿದೆ. ಈ ಮಧ್ಯೆಯೇ  ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಹೂ, ಹಣ್ಣುಗಳ ಬೆಲೆ ಏರಿಕೆಯಾಗಿದೆ.  ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಹೂವು, ಹಣ್ಣು-ಹಂಪಲು, ತರಕಾರಿಯ ಬೇಡಿಕೆ ಹೆಚ್ಚಾಗಿದ್ದು, ಹಣ್ಣುಗಳ ಬೆಲೆ ಕೊಂಚ ದುಬಾರಿಯಾಗಿದೆ.  ಹೂವುಗಳ ದರ ಗಗನಕ್ಕೇರಿದೆ. ಇನ್ನು ತರಕಾರಿ ದರ ಯಥಾಸ್ಥಿತಿ ಇದೆ. ಬೆಲೆ ಏರಿಕೆಯಾದರೂ ಸಹ ಗ್ರಾಹಕರು  ಖರೀದಿಯಲ್ಲಿ ತೊಡಗಿದ್ದಾರೆ.

ಹೂವುಗಳ ಬೆಲೆಗಳನ್ನ ನೋಡುವುದಾದರೇ  ಕೆಜಿಗೆ 600 ರೂ ಇದ್ದ ಮಲ್ಲಿಗೆ 1200 ರೂಗೆ ತಲುಪಿದೆ. ಕನಕಾಂಬರ 600 ರೂ.ನಿಂದ 1000ರೂ.ಗೆ ಏರಿಕೆಯಾಗಿದೆ. ಗುಲಾಬಿ 100ರೂ. ನಿಂದ 300 ರೂ. ಗೆ, ಸಂಪಿಗೆ 200 ರೂ.ನಿಂದ 400  ರೂ.ಗೆ ಏರಕೆಯಾಗಿದೆ. ಹಾಗೆಯೇ ಸೇವಂತಿಗೆ 200 ರೂ. ನಿಂದ 360 ರೂ.ಗೆ , ಚೆಂಡು ಹೂವು       10 ರೂ.ನಿಂದ 40 ರೂಗೆ ಏರಿಕೆಯಾಗಿದೆ.

ಹಣ್ಣುಗಳ ಬೆಲೆ ನೋಡುವುದಾದರೇ  ಕೆಜಿ ಸೇಬಿನಹಣ್ಣಿಗೆ  200ರೂ. ನಿಂದ 240 ಏರಿಕೆಯಾದರೇ, ದಾಳಿಂಬೆ 150 ರೂ.ನಿಂದ 250 ರೂ.ಗೆ ಹೆಚ್ಚಳವಾಗಿದೆ. ಕಿತ್ತಳೆ 100 ರೂ.ನಿಂದ 120 ರೂ.ಗೆ, ದ್ರಾಕ್ಷಿ 80ರೂ.ನಿಂದ 120 ರೂ.ಗೆ , ಮಾವು150ರೂ.ನಿಂದ 200 ರೂ.ಗೆ, ಬಾಳೆ ಹಣ್ಣು 80ರೂ.ನಿಂದ 100 ರೂ.ಗೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Ugadi festival, tomorrow,  Prices, flowers, fruits

The post ನಾಳೆ ಯುಗಾದಿ ಹಬ್ಬದ ಸಂಭ್ರಮ: ಗಗನಕ್ಕೇರಿದ ಹೂ, ಹಣ್ಣುಗಳ ಬೆಲೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

TG Govt: మూసీ పరిసరాల్లో నిర్మాణాల నియంత్రణకు ప్రభుత్వం చర్యలు..

మూసీ పరిసరాల్లో నిర్మాణాలను నియంత్రించేందుకు తెలంగాణ ప్రభుత్వం కీలక చర్యలు చేపట్టింది....

ಮೈಸೂರು ವಿವಿಯ ಡಾ. ಸುತ್ತೂರು ಎಸ್ ಮಾಲಿನಿ ಅವರಿಗೆ ‘ಫಿನಾಮಿನಲ್ SHE’  ಪ್ರಶಸ್ತಿ ಪ್ರದಾನ

ನವದೆಹಲಿ, ಏಪ್ರಿಲ್,2, 2025 (www.justkannada.in): ಮೈಸೂರು ವಿಶ್ವವಿದ್ಯಾಲಯದ ಜೆನಿಟಿಕ್ಸ್ ಮತ್ತು...

ഗുജറാത്തില്‍ വ്യോമസേന യുദ്ധവിമാനം തകര്‍ന്നുവീണ് പൈലറ്റിന് ദാരുണാന്ത്യം

വാരണാസി: ഗുജറാത്തിലെ ജാംനഗറില്‍ വ്യോമസേന യുദ്ധവിമാനം തകര്‍ന്നു വീണ് പൈലറ്റിന് ദാരുണാന്ത്യം....

'அவரைக் கூப்பிடாதீங்க'னு எல்லார்கிட்டயும் சொல்லியிருக்காராம்’ – தாடி பாலாஜி vs தவெக பஞ்சாயத்து

ஆரம்பத்தில் திமுக அனுதாபியாக இருந்தவர் நடிகர் தாடி பாலாஜி. விஜய் தமிழக வெற்றி...