23
Sunday
March, 2025

A News 365Times Venture

ಏ.12 ರಂದು ಮೈಸೂರಿನಲ್ಲಿ ‘ಆರೋಗ್ಯಕ್ಕಾಗಿ ನಡಿಗೆ’ ಮತ್ತು ಉಚಿತ ಆರೋಗ್ಯ ತಪಾಸಣೆ

Date:

ಮೈಸೂರು,ಮಾರ್ಚ್,20,2025 (www.justkannada.in):  ಮೈಸೂರಿನ ಪ್ರತಿಷ್ಠಿತ ‘ಮೈಸೂರ್ ವೆಸ್ಟ್ ಲಯನ್ಸ್ ಕ್ಲಬ್ ಆಫ್ ಮೈಸೂರ್ ವೆಸ್ಟ್’ ಸಂಸ್ಥೆ ವತಿಯಿಂದ ಹಾಗೂ ಮೈಸೂರಿನ ಮಹಾರಾಜ ಶಿಕ್ಷಣ ಸಂಸ್ಥೆ ಮತ್ತು ‘ಡ್ರಿಮ್ ಇಂಕ್’ ಇವರ ಸಹಯೋಗದೊಂದಿಗೆ ಏಪ್ರಿಲ್ 12 ರಂದು ‘ಆರೋಗ್ಯಕ್ಕಾಗಿ ನಡಿಗೆ’ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಲಯನ್ಸ್ ಕ್ಲಬ್ ಆಫ್ ಮೈಸೂರ್ ವೆಸ್ಟ್’ ಸಂಸ್ಥೆ ಅಧ್ಯಕ್ಷ ಡಾ.ಚೇತನ್,  ಈ ಬಾರಿ  ಏಪ್ರಿಲ್ 12 ರಂದು ಶನಿವಾರದಂದು ಬೆಳಗ್ಗೆ 6ಗಂಟೆಗೆ ‘ಆರೋಗ್ಯಕ್ಕಾಗಿ ನಡಿಗೆ/ಆರೋಗ್ಯಕ್ಕಾಗಿ ಓಟವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 12.30ರವರೆಗೆ ‘ಉಚಿತ ಆರೋಗ್ಯ ತಪಾಸಣೆ’ ಕಾರ್ಯಕ್ರಮದ ಜೊತೆಗೆ ಸಂಜೆ 6.30ಕ್ಕೆ ಚಂಪಕ ಅಕಾಡಮಿ ವತಿಯಿಂದ ಭರತನಾಟ್ಯ ಕಾರ್ಯಕ್ರಮವಿದೆ. ಅದೇ ದಿನ ಸಂಜೆ 6 ಗಂಟೆಗೆ ಸರಿಯಾಗಿ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೂತ್ರಪಿಂಡ ವೈಫಲ್ಯವಿರುವ ಬಡರೋಗಿಗಳಿಗೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ, ಹುತಾತ್ಮ ಸೈನಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ‘ವಾರ್ಷಿಕ ನಿಧಿ’ ಸಂಗ್ರಹಣೆ ಕಾರ್ಯಕ್ರಮವನ್ನು  ‘ಲಯನ್ಸ್ ವೆಸ್ಟ್ ವೆಲ್ನೆಸ್ ಎಂಬ ಹೆಸರಿನಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವೂ ಮಿರಾಕಲ್ ಅಂಡ್ ವೀಲ್ಸ್ ಎಂಬ ದೈಹಿಕ ಅಂಗವಿಕಲರ ತಂಡದೊಂದಿಗೆ ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಸರ್ವರಿಗೂ ಶಿಕ್ಷಣ, ಆರೋಗ್ಯ ದೊರೆಯಬೇಕೆಂಬ ಸ್ವಾಸ್ಥ ಸಮಾಜದ ಗುರಿಯೊಂದಿಗೆ ಏರ್ಪಡಿಸಿರುವ ಈ ಸೇವಾ ಕಾರ್ಯಕ್ರಮವು ನಮ್ಮ ನಿರೀಕ್ಷಿತ ಮಟ್ಟವನ್ನು ಮೀರಿ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಬೇಕೆಂದು ಆಶಿಸುತ್ತೇವೆ. ತಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಡಾ.ಚೇತನ್ ತಿಳಿಸಿದರು.

Key words: ‘Walk for Health, free health check-up, Mysore, 12th April

The post ಏ.12 ರಂದು ಮೈಸೂರಿನಲ್ಲಿ ‘ಆರೋಗ್ಯಕ್ಕಾಗಿ ನಡಿಗೆ’ ಮತ್ತು ಉಚಿತ ಆರೋಗ್ಯ ತಪಾಸಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

IPL 2025: నేడే సన్‌రైజర్స్ Vs రాజస్థాన్ రాయల్స్ మధ్య పోరు.. మ్యా్చ్ కు సర్వం సిద్ధం

హైదరాబాద్ క్రికెట్ లవర్స్ ఈగర్ గా వెయిట్ చేస్తున్న తరణం రానే...

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ: ಆರೋಪಿ ಕಾಲಿಗೆ ಗುಂಡೇಟು

  ಮೈಸೂರು,ಮಾರ್ಚ್,22,2025 (www.justkannada.in):  ಸ್ಥಳ ಮಹಜರು ವೇಳೆ  ಪೊಲೀಸರ ಮೇಲೆಯೇ ಹಲ್ಲೆ...

ശിശുക്ഷേമസമിതിയിലെ കുഞ്ഞിന്റെ മരണം; ന്യുമോണിയയെന്ന് പോസ്റ്റ്‌മോര്‍ട്ടം റിപ്പോര്‍ട്ട്

തിരുവനന്തപുരം: തിരുവനന്തപുരത്തെ ശിശുസംരക്ഷണ സമിതിയില്‍ വെച്ച് മരണപ്പെട്ട അഞ്ചരമാസം പ്രായമുള്ള കുഞ്ഞിന്റെ...

Fair Delimitation: "சொந்த நாட்டில் அரசியல் அதிகாரத்தை இழக்கும் சூழ்நிலை" – முதல்வர் ஸ்டாலின்

மத்திய அரசின், மக்கள் தொகை அடிப்படையிலான தொகுதி மறுவரையறைக்கு எதிர்ப்பு தெரிவித்து...