ಮಂಡ್ಯ, ಮಾ.16,2025: ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಕಲುಷಿತ ಆಹಾರ ಸೇವನೆ. ಮೇಘಾಲಯ ರಾಜ್ಯದ ಒರ್ವ ವಿದ್ಯಾರ್ಥಿ ಸಾವು. 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ಚಸ್ಥ, ಆಸ್ಪತ್ರೆಗೆ ದಾಖಲು .
ಕಲುಷಿತ ಆಹಾರ ಸೇವಿಸಿದ್ದ ಕೇರ್ ಲಾಂಗ್ (14) ಆಸ್ಪತ್ರೆಯಲ್ಲಿ ಸಾವು. ನೆನ್ನೆ ಪಟ್ಟಣದ ಮದನ್ ಚೌಲ್ಟ್ರಿಯಲ್ಲಿ ಸೇಠು ಸಮುದಾಯದಿಂದ ಹೋಳಿ ಆಚರಣೆ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಪಟ್ಟಣದ ಹೋಟೇಲ್ ನಿಂದ ಊಟಕ್ಕೆಂದು ಬಾತು ಸರಬರಾಜು ಮಾಡಲಾಗಿತ್ತು. ಹೋಳಿ ಸಂಭ್ರಮದ ಮುಗಿದ ಬಳಿ ಬಾತು ತಿಂದು ಜನರು ಉಳಿದ ಊಟವನ್ನು ಪಕ್ಕದಲ್ಲೆ ಇದ್ದ ಗೋಕುಲ ವಿದ್ಯಾಸಂಸ್ಥೆಯ ಹಾಸ್ಟೆಲ್ ಗೆ ನೀಡಿದ್ದರು.
ಈ ಊಟವನ್ನು ರಾತ್ರಿ ಸೇವಿಸಿದ್ದ 30 ವಿದ್ಯಾರ್ಥಿಗಳು ವಾಂತಿ ಭೇಧಿಯಿಂದ ಅಸ್ವಸ್ಥ..ಇದರಲ್ಲಿ ಓರ್ವ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವು. ಉಳಿದ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ. ಮಳವಳ್ಳಿ ಆಸ್ಪತ್ರೆಗೆ ಡಿಎಚ್ ಒ ಮೋಹನ್ ಭೇಟಿ, ಮಾಹಿತಿ ಪಡೆದು ಪರಿಶೀಲನೆ.
ರಾತ್ರಿ ಬಾತು ತಿಂದ ಸೇಠು ಸಮುದಾಯದ ಹಲವರು ಅಸ್ಚಸ್ಥದ ಮಾಹಿತಿ. ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.
key words: Mandya, Consuming contaminated food, A student of Meghalaya dies. 25 students fall ill
summary:
Mandya: Consuming contaminated food. A student of Meghalaya state dies. More than 25 students fall ill at malavalli town
The post ಕಲುಷಿತ ಆಹಾರ ಸೇವನೆ. ಮೇಘಾಲಯ ರಾಜ್ಯದ ಒರ್ವ ವಿದ್ಯಾರ್ಥಿ ಸಾವು. 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ಚಸ್ಥ.! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.