25
Friday
April, 2025

A News 365Times Venture

ಮೈಸೂರಿನಲ್ಲಿ ಶ್ರೀರಾಮ ನವಮಿ ಆಚರಣೆ: ವಿಶೇಷ ಪೂಜೆ, ಮಜ್ಜಿಗೆ ಪಾನಕ ವಿತರಣೆ

Date:

ಮೈಸೂರು,ಏಪ್ರಿಲ್,6,2025 (www.justkannada.in): ಇಂದು ಶ್ರೀರಾಮ ನವಮಿ ಹಿನ್ನೆಲೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಶ್ರದ್ದಾ ಭಕ್ತಿಯೊಂದಿಗೆ ಶ್ರೀರಾಮ ನವಮಿ ಆಚರಣೆ ಮಾಡಲಾಗುತ್ತಿದೆ.

ಶ್ರೀರಾಮನವಮಿ ಹಿನ್ನೆಲೆ ಮೈಸೂರಿನ ವಿವಿಧೆಡೆಗಳಲ್ಲಿರುವ ಶ್ರೀರಾಮ‌ಮಂದಿರಗಳಲ್ಲಿ ಇಂದು ವಿಶೇಷ ಪೂಜಾ ಕೈಂಕರ್ಯಗಳು ‌ನೆರವೇರಿಸಲಾಗುತ್ತಿದ್ದು, ಎಲ್ಲೆಡೆ ಮರ್ಯಾದ ಪುರುಷೋತ್ತಮ, ಪಿತೃ ವಾಕ್ಯ ಪರಿಪಾಲಕ ಶ್ರೀರಾಮನ ಸ್ಮರಣೆ ಮಾಡಲಾಗುತ್ತಿದೆ.

ಶ್ರೀರಾಮಪೇಟೆಯಲ್ಲಿರುವ ಶ್ರೀರಾಮಮಂದಿರದಲ್ಲಿ 135ನೇ ವರ್ಷದ ಶ್ರೀ ರಾಮೋತ್ಸವ ಆಯೋಜನೆ ಮಾಡಲಾಗಿದ್ದು ರಾಮಮಂದಿರದಲ್ಲಿ ವಿಶೇಷ ಪೂಜೆ ‌ನೆರವೇರಿಕೆ ಬಳಿಕ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಗುತ್ತಿದೆ. ರಾಮಮಂದಿರಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು ರಾಮಮಂದಿರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು  ಶ್ರೀ ರಾಮಾಭ್ಯುದಯ ಸಭಾದ ಅಧ್ಯಕ್ಷ ಡಾ. ಎನ್ ಶ್ರೀರಾಮ್ ಮಾಹಿತಿ ನೀಡಿದ್ದಾರೆ.

Key words: Sri Rama Navami, Mysore, Special Pooja

The post ಮೈಸೂರಿನಲ್ಲಿ ಶ್ರೀರಾಮ ನವಮಿ ಆಚರಣೆ: ವಿಶೇಷ ಪೂಜೆ, ಮಜ್ಜಿಗೆ ಪಾನಕ ವಿತರಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪುಲ್ವಾಮ ಘಟನೆ ಬಳಿಕ ಸ್ವಲ್ಪವೂ ವಿಶ್ರಮಿಸಬಾರದಿತ್ತು: ಉಗ್ರರ ದಾಳಿಗೆ ಇಂಟಲಿಜೆನ್ಸ್ ವೈಫಲ್ಯ ಕಾರಣ-ಸಿಎಂ ಸಿದ್ದರಾಮಯ್ಯ

ಚಾಮರಾಜನಗರ,ಏಪ್ರಿಲ್,24,2025 (www.justkannada.in):  ಈ ಹಿಂದೆ ಪುಲ್ವಾಮ ದಾಳಿಯಲ್ಲಿ 40 ಸೈನಿಕರು...

പഹല്‍ഗാം ഭീകരാക്രമണത്തിന്റെ ഉത്തരവാദിത്തം ഏറ്റെടുത്ത് അമിത് ഷാ രാജിവെക്കണം: സഞ്ജയ് റാവത്ത് എം.പി

ന്യൂദല്‍ഹി: പഹല്‍ഗാം ഭീകരാക്രമണത്തിന്റെ ഉത്തരവാദിത്തം ഏറ്റെടുത്ത് രാജിവെക്കണമെന്ന് കേന്ദ്ര ആഭ്യന്തര മന്ത്രി...

“போர் நடவடிக்கை, மக்களின் உரிமை அபகரிப்பு..'' – சிந்து நீர் ஒப்பந்த நிறுத்தம் பற்றி பாகிஸ்தான்!

பஹல்காம் தீவிரவாத தாக்குதலுக்குப் பிறகு சிந்து நீர் ஒப்பந்தத்தை இந்தியா நிறுத்தி...

Telangana BJP అనుకున్నది సాధించగలిగిందా?

తెలంగాణ బీజేపీ అనుకున్నది సాధించగలిగిందా? ఎమ్మెల్సీ ఎన్నిక పోలింగ్‌లో వేరే పార్టీ...