22
Saturday
March, 2025

A News 365Times Venture

ತಮ್ಮ ತಮ್ಮ ಕ್ಷೇತ್ರವನ್ನೇ ನೋಡುತ್ತಾ ಹೋದ್ರೆ ರಾಜ್ಯದ ಸಮಗ್ರ ಅಭಿವೃದ್ದಿ ಹೇಗೆ? ಸಚಿವರ ವಿರುದ್ದ ‘ಕೈ’ ಶಾಸಕ ಅಸಮಾಧಾನ

Date:

ಬೆಂಗಳೂರು,ಮಾರ್ಚ್,19,2025 (www.justkannada.in):  ಕೃಷಿ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನ ಸಚಿವರು ತಮ್ಮ ತಮ್ಮ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುತ್ತಾರೆ. ತಮ್ಮ ತಮ್ಮ ಕ್ಷೇತ್ರವನ್ನೇ ನೋಡುತ್ತಾ ಹೋದರೆ ರಾಜ್ಯದ ಸಮಗ್ರ ಅಭಿವೃದ್ದಿ ಹೇಗೆ? ಎಂದು ಕಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್ ಆನಂದ್ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಆಡಳಿತ ಪಕ್ಷದ ಶಾಸಕ ಕೆ.ಎಸ್ ಆನಂದ್, ಬಜೆಟ್ ನಲ್ಲಿ ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ.  ಇಂಜಿನಿಯರಯಿಂಗ್ ಕಾಲೇಜನ್ನ ಉನ್ನತ ಶಿಕ್ಷಣ ಸಚಿವರು ತಮ್ಮ ಕ್ಷೇತ್ರ ಚಿಂತಾಮಣಿಗೆ ತೆಗೆದುಕೊಂಡು ಹೋಗುತ್ತಾರೆ.  ಕೃಷಿಕಾಲೇಜನ್ನ ಕೃಷಿ ಸಚಿವರು ಮಂಡ್ಯಕ್ಷೇತ್ರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಸಚಿವರು ಅವರವರ ಕ್ಷೇತ್ರಗಳಿಗೆ ತೆಗೆದುಕೊಂಡು ಹೋದರೇ ನಮ್ಮ ಪರಿಸ್ಥಿತಿ ಏನು..? ಎಂದು ಪ್ರಶ್ನಿಸಿದರು.

ಇದರಿಂದ ಕೆಲವೇ ಕೆಲ ಜಿಲ್ಲೆಗಳಲ್ಲಿ ಅಭಿವೃದ್ದಿ ಆಗುತ್ತೆ. ಸಿಎಂ, ಸಚಿವರು ತಮ್ಮ ತಮ್ಮ ಕ್ಷೇತ್ರವನ್ನ ನೋಡುತ್ತಾ ಹೋದರೇ ಇಡೀ ರಾಜ್ಯದ ಸಮಗ್ರ ಅಭಿವೃದ್ದಿ ಹೇಗೆ? ಸಿಎಂ ಸಚಿವರು ರಾಜ್ಯದ ಸಮಗ್ರ ಅಭಿವೃದ್ದಿಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

Key words: Legislative Assembly, Congress, MLA, Ministers

The post ತಮ್ಮ ತಮ್ಮ ಕ್ಷೇತ್ರವನ್ನೇ ನೋಡುತ್ತಾ ಹೋದ್ರೆ ರಾಜ್ಯದ ಸಮಗ್ರ ಅಭಿವೃದ್ದಿ ಹೇಗೆ? ಸಚಿವರ ವಿರುದ್ದ ‘ಕೈ’ ಶಾಸಕ ಅಸಮಾಧಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Off The Record: కొలికపూడి మ*ర్డర్ స్కెచ్..? జనసేన కంప్లైంట్.. ఏంటి ఈ కథ..!

Off The Record: కొలికపూడి శ్రీనివాసరావు….. ఎన్టీఆర్ జిల్లా తిరువూరు టీడీపీ...

ಮೈಸೂರಿನಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆ

ಮೈಸೂರು ,ಮಾರ್ಚ್,20,2025 (www.justkannada.in): ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿ ಸಂತತಿ ಉಳಿವಿಗಾಗಿ...

Velmurugan-ஐ சீண்டிய சேகர்பாபு? & 'Mar 22' டெல்லிக்கு ஷாக் தரும் Stalin! | Elangovan Explains

இளங்கோவன் எக்ஸ்பிளைன்சில்,தமிழ்நாட்டில் எகிறும் கிரைம் ரேட். இதையொட்டி ஸ்டாலின் Vs எடப்பாடி...