14
Friday
March, 2025

A News 365Times Venture

ಜಿಮ್ ಇನ್ವೆಸ್ಟ್ ಕರ್ನಾಟಕ: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉದ್ಯೋಗಿಗಳಿಗೆ ಸುವರ್ಣಾವಕಾಶ

Date:

ಬೆಂಗಳೂರು,ಫೆಬ್ರವರಿ,13,2025 (www.justkannada.in):  ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಂದಿನ 10 ವರ್ಷಗಳಲ್ಲಿ ಸುಮಾರು 10 ಲಕ್ಷ ಉದ್ಯೋಗಿಗಳ ಅಗತ್ಯವಿದ್ದು, ಇದನ್ನು ಭಾರತದ ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸೆಮಿಕಂಡಕ್ಟರ್ ಪ್ರಾಡಕ್ಟ್ಸ್ ಗ್ರೂಪ್ (ಎಸ್ ಪಿ ಜಿ), ಏಷ್ಯಾದ ಭಾರತ ಅಧ್ಯಕ್ಷ ಅವಿನಾಶ್‌ ಅವುಲಾ ಬುಧವಾರ ಹೇಳಿದರು.

‘ಜಾಗತಿಕ ಹೂಡಿಕೆ ಸಮಾವೇಶ’ದಲ್ಲಿ ನಡೆದ ‘ಭವಿಷ್ಯದ ಕೌಶಲ್ಯಗಳು: ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಮತ್ತು ಸರಕಾರದ ಸಹಭಾಗಿತ್ವ” ಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಎಐ ಸೇರಿದಂತೆ ಹಲವು ತಂತ್ರಜ್ಞಾನಗಳು ನಿರೀಕ್ಷೆಗೂ ಮಿರಿ ಬೆಳೆಯುತ್ತಿದ್ದು, ಬಹುತೇಕ ತಾಂತ್ರಿಕ ಉಪಕರಣಗಳ ಅಭಿವೃದ್ಧಿಯಲ್ಲಿ ಸೆಮಿಕಂಡಕ್ಟರ್‌ ಅತ್ಯಗತ್ಯವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಈ ಕ್ಷೇತ್ರದಲ್ಲಿ ಕುಶಲ ಉದ್ಯೋಗಿಗಳ ಕೊರತೆ ಇದೆ. ಇದನ್ನು ಭಾರತ ಅವಕಾಶವಾಗಿ ಬಳಸಿಕೊಂಡು ಆ ಕೊರತೆ ನೀಗಿಸಬೇಕು. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುವುದು ಮಾತ್ರವಲ್ಲದೆ, ಅತ್ಯಂತ ನಿರ್ಣಾಯಕ ತಂತ್ರಜ್ಞಾನದಲ್ಲಿ ದೇಶ ಮೇಲುಗೈ ಸಾಧಿಸಲಿದೆ,” ಎಂದರು.

ಯಾರ್ಕ್ ವಿಶ್ವವಿದ್ಯಾಲಯದ ಬಾಹ್ಯ ಸಂಬಂಧಗಳ ನಿರ್ದೇಶಕಿ ಜೋನ್‌ ಕಾನ್‌ ಕ್ಯಾನನ್‌ ಅವರು, “ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಓದಿನ ಹಂತದಲ್ಲಿ ಉದ್ಯಮದ ಅನುಭವ ನೀಡಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಪಾಲುದಾರಿಕೆ ಏರ್ಪಡಬೇಕು. ಸರಕಾರ ಇದಕ್ಕೆ ಅನುವಾಗುವಂತೆ ಸೂಕ್ತ ರೀತಿಯ ಕಾನೂನಾತ್ಮಕ ವಾತಾವರಣ ನಿರ್ಮಿಸಬೇಕು,” ಎಂದರು.

ಎಸ್ 2ಟೆಕ್ ಅಧ್ಯಕ್ಷ ಮತ್ತು ಸಿಇಒ ಡೇ ವೀರ್ಲಪತಿ, “ಭಾರತ ಪ್ರಪಂಚದಲ್ಲಿದ ಅಧ್ಯಾತ್ಮದ ತವರಾಗಿದೆ. ಎಷ್ಟೇ ತಂತ್ರಜ್ಞಾನ ಬಂದರೂ ಇಲಾನ್‌ ಮಸ್ಕ್‌ ಅವರ ಆಪ್ಟಿಮಸ್‌ ರೋಬಾಟ್‌ ಎಲ್ಲೆಡೆ ಬಳಕೆಯಾಗುತ್ತಾ ಜನರ ಎಲ್ಲಾ ಕೆಲಸಗಳನ್ನು ರೋಬಾಟ್‌ ಮಾಡುವಂತಾದರೂ ಕೊನೆಗೆ ಜನರು ಬಯಸುವುದು ಸಂತೋಷವನ್ನು. ಅಂತಹ ಸಂತೋಷ ಭಾರತದ ಅಧ್ಯಾತ್ಮದಲ್ಲಿದೆ. ಹೀಗಾಗಿ ತಂತ್ರಜ್ಞಾನದ ಜೊತೆಗೆ ಭಾರತ ಇಡೀ ಜಗತ್ತಿಗೆ ಸಂತೋಷ ಹಂಚಬಲ್ಲದು,” ಎಂದು ಅಭಿಪ್ರಾಯಪಟ್ಟರು.

ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಹಿರಿಯ ಪಾಲುದಾರ ಜೋರ್ಗ್ ಹಿಲ್ಡೆಬ್ರ್ಯಾಂಡ್‌ ಗೋಷ್ಠಿ ನಿರ್ವಹಿಸಿದರು.

Key words: Jim Invest Karnataka, employees, semiconductor, sector

The post ಜಿಮ್ ಇನ್ವೆಸ್ಟ್ ಕರ್ನಾಟಕ: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉದ್ಯೋಗಿಗಳಿಗೆ ಸುವರ್ಣಾವಕಾಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

BREAKING NOW: ಮಸೀದಿ ವಿವಾದ , ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ.

ಮೈಸೂರು, ಮಾ.13,2025: ಹೈಕೋರ್ಟ್ ನಿರ್ದೇಶನದ ಮೇರೆಗೆ ಕ್ಯಾತಮಾರನಹಳ್ಳಿಯ ಮಸೀದಿಗೆ ಬೀಗ...

തുഷാര്‍ ഗാന്ധിയെ തടഞ്ഞുവെച്ച സംഘപരിവാര്‍ പ്രവര്‍ത്തകരെ ആദരിച്ച് ബി.ജെ.പി

തിരുവനന്തപുരം: ആര്‍.എസ്.എസിനെ വിമര്‍ശിച്ചെന്ന് ആരോപിച്ച് മഹാത്മാഗാന്ധിയുടെ കൊച്ചുമകനും പ്രമുഖ ഗാന്ധിയനുമായ തുഷാര്‍...

`₹ குறியீடு கொண்ட கலைஞர் நினைவு நாணயங்களை வீசி எறிந்து விடுமா திமுக?' – அன்புமணி கேள்வி

தேசிய கல்விக் கொள்கையை அமல்படுத்துவதில் எழுந்த சர்ச்சையில், தமிழகத்தில் இந்தி எதிர்ப்பு அலை...

Green Card: గ్రీన్ కార్డ్ ఉన్నంత మాత్రాన “శాశ్వత నివాసం” కాదు: యూఎస్ వైస్ ప్రెసిడెంట్..

Green Card: డొనాల్డ్ ట్రంప్ అమెరికా అధ్యక్షుడైన తర్వాత అక్రమ వలసదారులపై...